
13th June 2025
ನೃತ್ಯ ಕಲೆ ವಿಶೇಷವಾದದ್ದು, ಇದು ಸಾಧಾರಣವಾಗಿ ಸರಾಗವಾಗಿ ಕಲಿಯುವಂತದ್ದಲ್ಲ.ವಿಶೇಷ ತರಬೇತಿ ಮೂಲಕ ಕಲಿತಾಗ ಮಾತ್ರ ನೃತ್ಯ ಕಲೆ ಸಿದ್ದಿಸಬಲ್ಲದು. ಇಂತಹ ನೃತ್ಯ ಕಲೆಯನ್ನು ತಮ್ಮ ಜೀವಾಳವಾಗಿಸಿಕೊಂಡು ಹಲವಾರು ವರ್ಷಗಳಿಂದ ನೃತ್ಯ ಪ್ರದರ್ಶನಗಳಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಗುರುತಿಸಿಕೊಂಡಿರುವ ಧಾರವಾಡದ
ಸದಾನಂದ ಸಹದೇವಪ್ಪ ಬಂಗೆಣ್ಣವರ ಅವರು ವಿಶೇಷ ಸಾಧಕರಾಗಿದ್ದಾರೆ.
ಬಿಕಾಂ ಪದವಿಧರಾದ ಸದಾನಂದ ಬಂಗೆನ್ನವರ ಅವರು ಜಾನಪದ ನೃತ್ಯ, ರಂಗಭೂಮಿ ಕಲಾ ಪ್ರದರ್ಶಕ ಅಲ್ಲದೆ ಸಾಮಾಜಿಕ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಹಾಗೂ ಸಂಘಟಕರಾಗಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ.
ಅಂತರಾಷ್ಟ್ರೀಯ ಬ್ಯಾಂಕಾಂಕ್ದ ವಿಯೆಟ್ನಾಂ ಓಂ ಯೋಗಾ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಇವರು ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ವೈಭವ, ಕನ್ನಡ ಹಬ್ಬ, ಮಕ್ಕಳ ಜಾನಪದ ಜಾತ್ರೆ ಸೇವೆ ಸಲ್ಲಿಸಿದ್ದಾರೆ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದಾರೆ.
ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದ ಹಾಗೂ ಪ್ರತಿಷ್ಠಿತ ಕಲಾ ಉತ್ಸವಗಳಲ್ಲಿ ಸುಮಾರು 55 ಜನ ಕಲಾವಿದರ ತಂಡದೊಂದಿಗೆ ತಂಡದ ಪ್ರಮುಖ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಾಜ್ಯ ಹಾಗೂ ಅಂತರಾಷ್ಟ್ರೀಯ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳಾ ಮಂಡಳದ ಸದಸ್ಯರುಗಳಿಗೆ ಹಲವು ಕಲಾವಿದರಿಗೆ, ಆಸಕ್ತ ತಂಡಗಳಿಗೆ ನಿರಂತರವಾಗಿ ನೃತ್ಯ ತರಬೇತಿ, ಹಾಗೂ ದೇಹ ಸದೃಢತೆಗಾಗಿ ತರಬೇತಿ (ಫೀಟ್ಸ್ ನೇಸ), ಕೋಲಾಪೂರದ ಪ್ರತಿಷ್ಠಿತ ಸಂಸ್ಥೆಯಾದ ಸಂಜೇಗೌಡಾ ಅಂತರಾಷ್ಟ್ರೀಯ ಶಾಲೆ ಹಾಗೂ ಧಾರವಾಡದ ಎಸ್.ಡಿ.ಎಂ. ಮೆಡಿಕಲ್ ಹಾಗೂ ಇಂಜನಿಯರ್ ಕಾಲೇಜು, ಧಾರವಾಡದ ರಾಷ್ಟೋಥಾನ ವಿದ್ಯಾ ಕೇಂದ್ರ, ಜಾನಪದ ನೃತ್ಯ ಸಂಗೀತ, ಕಲೆ, ನಾಟಕಗಳಲ್ಲಿ ರಾಜ್ಯಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಶಿಬಿರಗಳನ್ನು, ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಧಾರವಾಡ ಉತ್ತವ, ಕಿತ್ತೂರ ಉತ್ಸವ. ಮೈಸೂರು ಉತ್ಸವಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ.
ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು ಕನ್ನಡದ ಪ್ರತಿಷ್ಟಿತ ಟಿವಿ ಚಾನಲ್ಗಳಾದ ಜೀ ಕನ್ನಡ, ಸುವರ್ಣ ಚಾನಲ, ಈ ಟಿವಿ ಕನ್ನಡ "ಜೀ ಕನ್ನಡ ಕುಟುಂಬ ಆವಾರ್ಡ", "ಸಂಗೀತ ಸಂಭ್ರಮ", "ಕುಣಿಯೋಣು ಬಾರಾ" ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಕಿರು ಚಿತ್ರಗಳಲ್ಲಿ ಬಂಜಾರ ನೃತ್ಯ ನೀರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ ಆಯೋಜಿಸುವ ಪ್ರತಿ ವರ್ಷದ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಮಹೋತ್ಸವ ಹಾಗೂ ವಿಶ್ವ ಜ್ಞಾನದ ದಿನಾಚರಣೆ ಅಂಗವಾಗಿ ಏರ್ಪಡಿಸಿದ “ಭೀಮೋತ್ಸವ ದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿದ್ದಾರೆ. ಧಾರವಾಡ ಜಿಲ್ಲಾ ಭಾರತ ಗಣರಾಜ್ಯೋತ್ಸವ ಸಮಿತಿಯು ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಬೆಳಗಾವಿಯ ಹಲಸಿ ಕದಂಬೋತ್ಸವದಲ್ಲಿ ಭಾಗವಹಿಸಿ ಉತ್ತಮ ನೃತ್ಯ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡ ಯುವಜನ ಮಹೋತ್ಸವದಲ್ಲಿ ಜಾನಪದ ನೃತ್ಯ ಪ್ರದರ್ಶನ, ಹೋಟೆಲ ಒಡೆಯರ ಸಂಘ ಧಾರವಾಡದ "ಆಹಾರ ಮೇಳ"ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, ವಿಶ್ವ ಕನ್ನಡ ಸಮ್ಮೇಳನ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ದೇಶದ ವಿವಿಧ ರಾಜ್ಯಗಳಲ್ಲಿ ಹೊರನಾಡು ಉತ್ಸವ ಹಾಗೂ ವಿವಿಧ ಜಿಲ್ಲಾ ಉತ್ಸವಗಳಲ್ಲಿ ನಮ್ಮ ತಂಡದೊಂದಿಗೆ ಪ್ರದರ್ಶನ ನೀಡಿದ್ದಾರೆ.
ಮಕ್ಕಳ ಕಿರು ಚಲನಚಿತ್ರ, ಮತ್ತು ಮಂಗಳೂರಿನ ಸಾಂಸ್ಕೃತಿಕ ನೃತ್ಯ, ಕಣಗಿ ನೃತ್ಯ ಹಾಗೂ ವೀರಗಾಸೆ ಜಾನಪದ ನೃತ್ಯಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಕಾನೂನು ಅರಿವು-ನೆರವು ಕುರಿತು ಜಾಗೃತಾ ಕಾರ್ಯಕ್ರಮ, ಬಾಲ ಕಾರ್ಮಿಕ ಪದ್ದತಿ ವಿರುದ್ಧ ಅರಿವು ಮೂಡಿಸುವುದು. ಪರಿಸರ ಸಂರಕ್ಷಣೆಗಾಗಿ ವನಮಹೋತ್ಸವ, ದೇಶ ಕಾಯುವ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ, ರೈತರ ಕುರಿತು ವಿಶೇಷ ಕಾರ್ಯಕ್ರಮ, ಉಚಿತ ಜಾನಪದ ನೃತ್ಯ ತರಬೇತಿ ಶಿಬಿರ, ಪಲ್ಸ ಪೋಲಿಯೋ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಭಾರತೀಯ ಕ್ರಿಕೇಟ ತಂಡದ ಆಟಗಾರರಿಗೆ ಪಂದ್ಯ ಗೆಲ್ಲಲು (ವಲ್ಡ್ ಕಪ್) ನೃತ್ಯದ ಮೂಲಕ ಪ್ರೋತ್ಸಾಹ ಇತ್ಯಾದಿ ವಿವಿಧ ಸಾಮಾಜಿಕ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸುತ್ತಾ ರಾಷ್ಟ್ರೀಯ ಭಾವೈಕ್ಯತಾ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಬಯಲು ಸೀಮೆ ಜಾನಪದ ಕಲಾ ಮೇಳ (ಗ್ರಾಮೀಣ ಕಲಾವಿದರ ಕುರಿತು) ರಾಜ್ಯ, ಜಿಲ್ಲಾ, ಹಾಗೂ ಶಾಲಾ ಮಟ್ಟದ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ನೃತ್ಯ ಸಂಗಮ (ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ) ರಾಜ್ಯ ಮಟ್ಟದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಿ ಪ್ರೋತ್ಸಾಹಿಸಿ, ಅವರನ್ನು ಗೌರವಿಸಿದ್ದಾರೆ. ಬಡವಿದ್ಯಾರ್ಥಿಗಳಿಗೆ ಬುಕ್ ವಿತರಣಾ ಕಾರ್ಯಕ್ರಮ, ಸಾಂಸ್ಕೃತಿಕ ಕಲಾ ಮೇಳ, ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ರಾಜ್ಯಮಟ್ಟದ ಕಲಾ ಪ್ರತಿಭೆಗಳ ಪ್ರದರ್ಶನ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಸಂಘಟಿಸಿದ್ದಾರೆ.
*ಸಂದ ಪ್ರಶಸ್ತಿಗಳು* - ಶ್ರೀ ಮಲ್ಲಿಕಾರ್ಜುನ ಮನ್ಸೂರ, ರಾಜ್ಯ ಪ್ರಶಸ್ತಿ ವಿಜೇತೆ ಫಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ "ಜಾನಪದ ಶ್ರೀ" ಪ್ರಶಸ್ತಿ, "ಜಾನಪದ ಕಲಾಸಿರಿ", ಪರಿವಾರ ಸಂಸ್ಥೆಯ ರಾಜ್ಯಮಟ್ಟದ "ವರ್ಷದ ಶ್ರೇಷ್ಟ ವ್ಯಕ್ತಿ" ಪ್ರಶಸ್ತಿ, ಸಾಂಸ್ಕೃತಿಕ ಜಾನಪದ ಲೋಕ-2015 ರ ಪ್ರಶಸ್ತಿ, ಕಲಾ ತಪಸ್ವಿ, “ಶ್ರೇಷ್ಠ ನೃತ್ಯ ನಿರ್ದೇಶಕ ಪ್ರಶಸ್ತಿ, ನಟರಾಜ ಯುವಕ ಸಂಘದ ಪ್ರಶಸ್ತಿ ಪತ್ರ, ಉಪೇಂದ್ರ ಅಭಿಮಾನಿಗಳ ಸಂಘದ ಪ್ರಶಸ್ತಿ ಪತ್ರ, ರಾಕ್ ಸ್ಟಾರ್ ಡ್ಯಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಕುಷ್ಟಗಿಯ ಎಚ್.ಬಿ. ಡ್ಯಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಸ್ವಾಮಿ ವಿವೇಕಾನಂದ ಯುವಕ ಸಂಘದ ಪ್ರಶಸ್ತಿ ಪತ್ರ, ಗದುಗಿನ ಹೊಯ್ಸಳ ಡಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಹುಬ್ಬಳ್ಳಿಯ ಶ್ರೀ ದೇವಿ ನಲ್ಲನಮ್ಮ ಕಲ್ಯಾಣ ಸೇವಾ ಸಂಘದ ಪ್ರಶಸ್ತಿ ಪತ್ರ, ಯುವಾ ಡಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಶ್ರೀ ದುರ್ಗಾ ಶಕ್ತಿ ಕಲ್ಟರಲ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಸಾಂಸ್ಕೃತಿಕ ಲೋಕ ಆರ್ಟ್ & ಕಲ್ಬರಲ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಇತ್ಯಾದಿ ಹಲವಾರು ಪುರಸ್ಕಾರ, ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ನನ್ನ ಕಾರ್ಯ ಚಟುವಟಿಗೆಗಳನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘ, ಉತ್ತರ ಕರ್ನಾಟಕ ನೃತ್ಯ ಕಲಾವಿದರ ಸಂಘ, ಶ್ರೀ ಶಿರಡಿ ಸಾಯಿಬಾಬಾ ಸಂಸ್ಥೆ ಧಾರವಾಡ, ನಾಟ್ಯ ಸ್ಪೂರ್ತಿ ಆರ್ಟ್ ಆ್ಯಂಡ್ ಕಲ್ಲ್ ಅಕ್ಯಾಡೆಮಿ ಅಧ್ಯಕ್ಷನಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಸದಸ್ಯನಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಕಲಾ ಸೇವೆಯನ್ನು ಮಾಡುತ್ತಿರುವ ಇಂಥ ಪ್ರತಿಭಾವಂತರನ್ನು ರಾಜ್ಯ ಸರಕಾರ ಗುರುಸಿ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ.
ಲೇಖನ- ಸಿ.ವಾಯ್.ಮೆಣಸಿನಕಾಯಿ
ಸಂಪಾದಕರು, ಸುದ್ದಿ ಸದ್ದು ಪತ್ರಿಕೆ